ಡಿಕೆಶಿಗೆ ಪಂಚ ಗ್ಯಾರಂಟಿಗಳ ವಿಶೇಷ ಹಾರ, ಸನ್ಮಾನ

 

Pulicsed: Usha HP

ಶಿವಮೊಗ್ಗ: ಗ್ಯಾರೆಂಟಿ ಫಲಾನುಭವಿಗಳ ಸಮಾವೇಶದ ಉದ್ಘಾಟನೆಗೆ ನಾಲೆ ನಗರÀಕ್ಕೆ ಕೆಪಿಸಿಸಿ ರಾಜ್ಯಾಧ್ಯಕ್ಷ, ಉಪ ಮುಖ್ಯಮಂತ್ರಿ  ಡಿ.ಕೆ.ಶಿವಕುಮಾರ್ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಅವರನ್ನು 'ಪಂಚ ಗ್ಯಾರಂಟಿಗಳ ಹಾರ ಹಾಕಿ ವಿಶೇಷವಾಗಿ ಸ್ವಾಗತಿಸಲಾಗುವುದು ಎಂದು ಕಾಂಗ್ರೆ ಮುಖಂಡ ಎಚ್ ಸಿ ಯೋಗೇಶ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರದಿಂದ ಸುಮಾರು ಹತ್ತು ಸಾವಿರ ಜನ ಫಲಾನುಭವಿಗಳು ಬರಲಿದ್ದಾರೆ.ಅವರಿಗೆಲ್ಲ ವೈಯಕ್ತಿಕವಾಗಿ ಆಹ್ವಾನಿಸಲಾಗಿದೆ. ೧೫ ಸಾವಿರ ಆಹ್ವಾನ ಪತ್ರಿಕೆಗಳನ್ನು ಶಿವಮೊಗ್ಗದಲ್ಲಿ ಈಗಾಗಲೇ ವಾರ್ಡ್ ಅಧ್ಯಕ್ಷರು, ಪ್ರತಿನಿಧಿಗಳ ಮೂಲಕ ಹಂಚಲಾಗಿದೆ. ಕಾಂಗ್ರೆಸ್ ಪಕ್ಷದ ಈ ಪಂಚ ಗ್ಯಾರಂಟಿಗಳು ಜನರಲ್ಲಿ ಹಬ್ಬ ಮೂಡಿಸಿವೆ. ಈ ಸಮಾವೇಶ ಕೂಡ ಹಬ್ಬದ ರೀತಿಯಲ್ಲಿ ನಡೆಯಲಿದೆ ಎಂದರು.

ಈಗಾಗಲೇ ಶಿವಮೊಗ್ಗದಲ್ಲಿ ೬೨ ಸಾವಿರ ಗೃಹಲಕ್ಷ್ಮೀ ಫಲಾನುಭವಿಗಳು, ೫೨ ಸಾವಿರ ಗೃಹಜ್ಯೋತಿ, ೬೧,೧೪೦೦೦ ಶಕ್ತಿ ಫಲಾನುಭವಿಗಳಿದ್ದರೆ ೫೧,೯೧೭೨೨೫೨ ಸಾವಿರ ಗೃಹಜ್ಯೋತಿ, ೬೧,೧೪೦೦೦ ಶಕ್ತಿ ಫಲಾನುಭವಿಗಳಿದ್ದರೆ ೫೧,೯೧೭ ಯುವನಿಧಿ ಫಲಾನುಭವಿಗಳಿದ್ದಾರೆ. ಇದು ಸರ್ಕಾರದ ಹೆಮ್ಮೆ ಎಂದರು.

Post a Comment

أحدث أقدم