ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ ಆರ್ ಎಂ ಮಂಜುನಾಥ್ ಗೌಡ ಅವರ ಮನೆ ಮೇಲೆ ಐಡಿ ದಾಳಿ ಖಂಡಿಸಿ ಬಿಜೆಪಿ ವಿರುದ್ದ ಪ್ರತಿಭಟನೆ.

ರಾಜ್ಯ ಕಾಂಗ್ರೆಸ್ ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕರು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಡಾ ಆರ್ ಎಂ ಮಂಜುನಾಥ ಗೌಡ ಅವರ  ಮನೆ ಮೇಲೆ ಇಡಿ ಇಲಾಖೆಯ ದಾಳಿ ಖಂಡಿಸಿ ಇಂದು ರಾಜ್ಯ ಮಾಜಿ ಸಚಿವರು ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ತೀರ್ಥಹಳ್ಳಿ ಕಾಂಗ್ರೆಸ್ ಘಟಕದ ವತಿಯಿಂದ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.


ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹೆಚ್.ಎಸ್ ಸುಂದರೇಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕಸ್ತೂರು ಮಂಜುನಾಥ ಮುಡಬಾ ರಾಘವೇಂದ್ರ ಕಲಗೋಡ್ ರತ್ನಾಕರ್ ಡಿ ಎಸ್ ವಿಶ್ವನಾಥ್ ಶೆಟ್ಟಿ ಡಾ ಸುಂದರೇಶ್ ಹಾರೋಗೋಳಿಗೆ ಪದ್ಮನಾಭ್ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಕಟ್ಟೆಹಕ್ಲು ಕಿರಣ್ ರಾಘವೇಂದ್ರ ಶೆಟ್ಟಿ ಸಹಕರಿಗಳಾದ ವಿಜಯದೇವ್ ಬಂಡಿ ರಾಮಚಂದ್ರ ಬಾಳೆಹಳ್ಳಿ ಪ್ರಭಾಕರ್ ಶ್ರುತಿವೆಂಕಟೇಶ್  ಶಚೀಂದ್ರ ಹೆಗ್ಡೆ  ಗೀತಾ ರಮೇಶ್ ಮತ್ತು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಪಕ್ಷದ ಗ್ರಾಮ ಪಂಚಾಯತಿ ಅಧ್ಯಕ್ಷರುಗಳು ಮತ್ತು ಉಪಾಧ್ಯಕ್ಷರುಗಳು ಮತ್ತು ಪಟ್ಟಣ ಪಂಚಾಯಿತಿ ಸದಸ್ಯರುಗಳು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರುಗಳು ಮಾಜಿ ತಾಲೂಕ ಪಂಚಾಯತಿ ಸದಸ್ಯರುಗಳು ಎಪಿಎಂಸಿ ಸದಸ್ಯರುಗಳು ಇನ್ನು ಹಲವಾರು ಮುಖಂಡರುಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ಸಭೆಯ ನೇತೃತ್ವ ವಹಿಸಿದ್ದ ಮಾಜಿ ಸಚಿವರು ಮುಂದಿನ ದಿನಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಈ ರೀತಿಯ ಸರ್ಕಾರದ ತನಿಕ ಸಂಸ್ಥೆಗಳನ್ನು ಬಳಸಿ ವಿರೋಧ ಪಕ್ಷದ ನಾಯಕರುಗಳ ಮೇಲೆ ವಿನಾಕಾರಣ ಈ ರೀತಿಯ ತನಿಖೆ ಮತ್ತು ಆರೋಪ ಹೊರಿಸುವುದರಿಂದ ಬಿಜೆಪಿ ಪಕ್ಷಕ್ಕೆ ಜನರು ತಕ್ಕ ಪಾಠ ಕಲಿಸುವರು ಮತ್ತು ಮುಂದಿನ ಹೋರಾಟದಲ್ಲಿ ನಾನು ಹಾಗೂ ಡಾಕ್ಟರ್ ಆರ್ ಎಂ ಮಂಜುನಾಥ್ ಗೌಡ್ರು ಭಾಗವಹಿಸಿ ಹೋರಾಟ ಮಾಡುತ್ತೀವಿ ಅವರು ಈ ವಿಚಾರದಲ್ಲಿ ಯಾವುದೇ ರೀತಿ ಭಯಪಡುವುದಿಲ್ಲ ನಾನು ಮತ್ತು ನಮ್ಮ ಕಾಂಗ್ರೆಸ್ ಪಕ್ಷ ಅವರೊಂದಿಗೆ ಇದ್ದೇವೆ ಎಂದು, ಕಿಮ್ಮ ನೆವರು ನುಡಿದರು


Post a Comment

أحدث أقدم