ಸಿಪ್ಪೆಗೋಟು ಅಡಿಕೆಯ ಖರೀದಿಗಾಗಿ ಹಣ ತೆಗೆದುಕೊಂಡು ಬಂದಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ವ್ಯಕ್ತಿಯಿಂದ ರೂ.5 ಲಕ್ಷ ದರೋಡೆ!: ತುಂಗಾ ನಗರ ಪೊಲೀಸ್ಕಾರ್ಯಾಚರಣೆ ದರೋಡೆಕೋರರ ಬಂಧನ.

 ದಿನಾಂಕಃ-06-02-2023  ರಂದು ಬೆಳಗ್ಗೆ ಸಿಪ್ಪೆಗೋಟು ಅಡಿಕೆಯನ್ನು ಖರೀದಿ ಮಾಡಲು ಹಣವನ್ನು ತೆಗೆದುಕೊಂಡು ಬಂದಿದ್ದ ಸುರೇಶ್ ಕುಮಾರ್, 30  ವರ್ಷ, ಬಾಳೆಹೊನ್ನೂರು, ಚಿಕ್ಕಮಗಳೂರು ರವರಿಗೆ, ಅಡಿಕೆಯು ಶಿವಮೊಗ್ಗ ನಗರದ ಕಿಮ್ಮನೆ ರೆಸಾರ್ಟ್ ಗೆ ಹೋಗುವ ದಾರಿಯಲ್ಲಿರುವ ಗೋಡೌನ್ ನಲ್ಲಿ ಇದೆ, ಬನ್ನಿ ತೋರಿಸುತ್ತೇನೆ ಎಂದು ಹೇಳಿದ್ದರಿಂದ, ಸುರೇಶ್ ಕುಮಾರ್ ಮತ್ತು ಸ್ನೇಹಿತನಾದ ಸಂತೋಷ್ ರವರು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪೆಸಿಟ್ ಕಾಲೇಜು ಹತ್ತಿರ ಕಿಮ್ಮನೆ ರೆಸಾರ್ಟ್ ಗೆ ಹೋಗುವ ದಾರಿಯಲ್ಲಿ ಹೋದಾಗ ಅಪರಿಚಿತ ವ್ಯಕ್ತಿಗಳು ಇವರ ಮೇಲೆ ಹಲ್ಲೆ ಮಾಡಿ, ರೂ 5,00,000/- ಹಣವನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0054/2023  ಕಲಂ 395  ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. 


    ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಹಚ್ಚಲು ಶ್ರೀ ಮಿಥುನ್ ಕುಮಾರ್ ಜಿಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಬಾಲರಾಜ್, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, ಶ್ರೀ ಮಂಜುನಾಥ್, ಪೊಲೀಸ್ ನಿರೀಕ್ಷಕರು, ತುಂಗಾನಗರ ಪೊಲೀಸ್ ಠಾಣೆ ರವರ ನೇತೃತ್ವದ, ಶ್ರೀ ರಾಜುರೆಡ್ಡಿ ಬೆನ್ನೂರು, ಪೊಲೀಸ್ ಉಪ ನಿರೀಕ್ಷಕರು,  ಶ್ರೀ ಮನೋಹರ್ ಸಹಾಯಕ ಉಪ ನಿರೀಕ್ಷಕರು  ಹಾಗೂ ಸಿಬ್ಬಂದಿಗಳಾದ ಹೆಚ್.ಸಿ ಕಿರಣ್ ಮೋರೆ, ಅರುಣ್ ಕುಮಾರ, ಮೋಹನ್ ಕುಮಾರ್ ಹಾಗೂ ಸಿಪಿಸಿ ನಾಗಪ್ಪ ಅಡಿವಪ್ಪನವರ್, ಹರೀಶ್ ನಾಯ್ಕ, ಲಂಕೇಶ್ ಕುಮಾರ್, ಕಾಂತರಾಜ್, ಅರಿಹಂತ ಶಿರಹಟ್ಟಿ ಮತ್ತು ಹರೀಶ್ ರವರುಗಳನ್ನೊಳಗೊಂಡ ತಂಡವನ್ನು ರಚನೆ ಮಾಡಲಾಗಿರುತ್ತದೆ.


      ಸದರಿ ತನಿಖಾ ತಂಡವು ದಿನಾಂಕಃ 16-02-2023  ರಂದು ಪ್ರಕಣದ ಆರೋಪಿತರಾದ 1) ಮಂಜನಾಯ್ಕ @ ಮಂಜು, 35 ವರ್ಷ, ಗೋಪಾಳ ಶಿವಮೊಗ್ಗ, 2) ಆಸೀಫ್ ವುಲ್ಲಾ @ ಆಸೀಪ್, 32 ವರ್ಷ, ಶಿಕಾರಿಪುರ ಟೌನ್, 3) ಗಣೇಶ್ ನಾಯ್ಕ @ ಗಣು, 28 ವರ್ಷ, ಕೊನಗವಳ್ಳಿ, ಶಿವಮೊಗ್ಗ, 4) ದಾವಲ್ ಬಡಗಿ, 35 ವರ್ಷ, ಟ್ಯಾಂಕ್ ಮೊಹಲ್ಲಾ, ಶಿವಮೊಗ್ಗ  ಮತ್ತು 5) ರಿಜ್ವಾನ್ ಅಹ್ಮದ್ @ ಮಹ್ಮದ ರಿಜ್ವಾನ್, 48 ವರ್ಷ, ಆರ್.ಎಮ್.ಎಲ್. ನಗರ, ಶಿವಮೊಗ್ಗ ರವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ರೂ 3,15,000/- ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ 03  ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.

Post a Comment

أحدث أقدم