ಶಿವಮೊಗ್ಗ: ಗೃಹ ಸಚಿವರ ತವರಲ್ಲಿ ಬಿಜೆಪಿ ಗೂಂಡಾಗಳ ಹಾವಳಿ; ಕಿಮ್ಮನೆ ರತ್ನಾಕರ್ ಆಕ್ರೋಶ

 ನಿನ್ನೆ ತೀರ್ಥಹಳಿಯ ಸುರಭಿ ಹೋಟೆಲ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಮೇಲೆ ನಡೆದ ಹಲ್ಲೆ , ಈ ಪ್ರಕರಣದಲ್ಲಿ ಗಾಯಾಳುವಾಗಿದ್ದ ಹರೀಶ ರವರನ್ನು ಇಂದು ಮೆಗ್ಗಾನ್ ಆಸ್ಪತ್ರೆಯಲ್ಲಿ  ಕಿಮ್ಮನೆ ರತ್ನಕರ್ ಬೇಟಿ ಮಾಡಿ ಆರೋಗ್ಯ ಪರಿಸ್ಥಿತಿಯ  ಬಗ್ಗೆ ಮಾಹಿತಿ ಪಡೆದರು.

                                           ಹಲ್ಲೆಗೊಳಗಾದ ವ್ಯಕ್ತಿ ಹರೀಶ್

 ನಂತರ ಮಾಧ್ಯಮದವರ ಜೊತೆ ಮಾತನಾಡಿದ ಕಿಮ್ಮನೆ ರತ್ನಾಕರ್ ರವರು  ತೀರ್ಥಹಳಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಗೃಹ ಇಲಾಖೆಯ ವಿಫಲತೆ ಎದ್ದು ಕಾಣುತ್ತಿದೆ. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣ ಬಂದಿಸಬೇಕು ಇಲ್ಲದಿದ್ದರೆ ಪ್ರತಿಭಟನೆಯ ಹಾದಿ ಹಿಡಿಯುವುದು ಅನಿವಾರ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಜಗದೀಶ, ಸೂಡೂರ್ ಶಿವಣ್ಣ, ರಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೇತನ್, ಎನ್ ಎಸ್ ಯು ಐ ಜಿಲ್ಲಾ ಅಧ್ಯಕ್ಷ ವಿಜಯ್ ಕುಮಾರ್, ಅಲ್ಪಸಂಖ್ಯಾತ ಘಟಕದ ಮಹಮದ್ ನಿಹಾಲ್, ಅರಿಫ್, ರವಿ ಕಾಟಿಕೆರೆ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಮರನಾಥ ಶೆಟ್ಟಿ, ಉಪಾಧ್ಯಾಕ್ಷರಾದ ಜಯಕರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಲ್ ಗೌಡ, ಕಟ್ಟೆಹಕ್ಲು ಫಣಿರಾಜ್, ನದಿಮ್ ಬೆಟಮಕ್ಕಿ ಮತ್ತಿತರ ಉಪಸ್ಥಿತರಿದ್ದರು. 

                 ಹಲ್ಲೆಗೊಳಗಾದ ವ್ಯಕ್ತಿಯ ಆರೋಗ್ಯ ಸ್ಥಿತಿ ವಿಚಾರಿಸುತ್ತಿರುವ  ಕಿಮ್ಮನೆ ರತ್ನಾಕರ್


Post a Comment

أحدث أقدم