ಈಡಿಗ, ಬಿಲ್ಲವ ನಾಮಧಾರಿ ಹಾಗೂ 26 ಉಪ ಪಂಗಡದ ನಾರಾಯಣ ಗುರು ಸಮಾಜ ಬಾಂಧವರೇ ಸಮಾಜದ ಉಳಿವಿಗಾಗಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಪಾಲ್ಗೊಳ್ಳಿ...!

                              ನಿಟ್ಟೂರು ಮಠದ ಶ್ರೀ ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿ ಕರೆ 

    ಶಿವಮೊಗ್ಗ :ಹಿಂದುಳಿದ ಜಾತಿಗಳ 2ಎ ಮೀಸಲಾತಿ ರಕ್ಷಣೆ ಮತ್ತು ಸಮಾಜದ ಅಭಿವೃದ್ದಿಗಾಗಿ ನಿಗಮ ಮಂಡಳಿ ಹಾಗೂ ಶರಾವತಿ ಮತ್ತು ಇತರೆ ಮುಳುಗಡೆ ಸಂತ್ರಸ್ಥರ ಪುನರ್ವಸತಿ ಕುರಿತು ಬೃಹತ್ ಹಕ್ಕೊತ್ತಾಯ ಸಮಾವೇಶ ಜ.22 ರಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಶಿವಮೊಗ್ಗದಲ್ಲಿ ನಡೆಸಲು ಸಮಾಜದ ಹಿರಿಯರು ನಿರ್ಧರಿಸಿದ್ಧು,ಇದೇ ವೇಳೆ ಸಮಾಜ ಬಾಂಧವರನ್ನು ಒಟ್ಟುಗೂಡಿಸುವ ಸಲುವಾಗಿ ಪೂರ್ವ ಭಾವಿ ಸಭೆಗಳು ನಡೆದಿದ್ದು, ಶ್ರೀ ನಾರಾಯಣ ಗುರು ಮಹಾ ಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿ ಪ್ರತಿ ಹೋಬಳಿ ಮಟ್ಟದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಮಾಜದ ಉಳಿವಿಗಾಗಿ ಹೋರಾಡಲು ಜ.22 ರ ಕಾರ್ಯಕ್ರಮಕ್ಕೆ ನಿಮ್ಮೊಂದಿಗೆ ನಿಮ್ಮ ಕುಟುಂಬದವರನ್ನು ಕರೆತರುವಂತೆ ಮಾಧ್ಯಮದವರ ಮೂಲಕ ತಿಳಿಸಿದರು.

                                  ವರದಿ : ತೀರ್ಥಹಳ್ಳಿ ,ನ್ಯೂಸ್ ,ಕುರುವಳ್ಳಿ ನಾಗರಾಜ್ 

Post a Comment

أحدث أقدم