ತಿಪ್ಪೇಸ್ವಾಮಿ ಕಮಲ್, ಖುಷಿ ಎಂ ಸಭಾಭಟ್ ಮಾತನಾಡಿ, ದಸರಾಹಬ್ಬವನ್ನ ಕಳೆದ ವಿಷಯದ ಬಗ್ಗೆ ಲೇಖನ, ಬುಗುರಿತರ ತಿರುಗಿದ ಹಿನ್ನಲೆಯಲ್ಲಿ 39 ಜನರ ಲೇಖನವೇ ಬುಗುರಿ.
128 ಜನ ವಿದ್ಯಾರ್ಥಿಗಳಲ್ಲಿ 39 ಜನ ವಿದ್ಯಾರ್ಥಿಗಳ ಲೇಖನ ಆಯ್ಕೆಯಾಗಿದೆ. ಒಬ್ಬೊಬ್ಬರ ಲೇಖನಗಳು 15-20 ಪುಟಗಳನ್ನ ಹೊಂದಿದೆ. 2024 ರ ಅಕ್ಟೋಬರ್ ರಜೆಯ ವೇಳೆ ಮಕ್ಕಳು ಭೇಟಿ ನೀಡಿದ ಸ್ಥಳದ ಬಗ್ಗೆ ವಿವರಣೆಗಳು, ಸ್ಥಳದ ಮಹಿಮೆ, ಜಾನಪದ, ಅದರ ಬಗ್ಗೆ ಅನುಭವಗಳು ಮೊದಲಾದ ಅನುಭವ ವಿದ್ಯಾರ್ಥಿಗಳು ಬರೆದ ಲೇಖನವೇ ಬುಗರಿಯಾಗಿದೆ.
1000 ಪುಸ್ತಕ ಪ್ರಿಂಟ್ ಮಾಡಲಾಗಿದೆ. ಚೆನ್ನಗಿರಿ ಚೆನ್ನಾಗಿರಿ, ಬಿಟ್ಟುಬಿಡದ ರಜೆಯ ದಿನಗಳು, ಮೊದಲಾದ 400 ಪುಟಗಳ ರಸವತ್ತಾದ ಲೇಖನಗಳನ್ನ ಬುಗುರಿಯಾಗಿಸಿದೆ. ಮುನ್ನಡಿಯನ್ನ ಗುರುರಾಜ ಕರ್ಜಗಿ ಬರೆದಿದ್ದಾರೆ. ಸಣ್ಣ ಕವನಗಳು ಈ ಲೇಖನದ ಮಧ್ಯೆ ಬರೆಯಲಾಗಿದೆ.
ಈ ಪುಸ್ತಕದ ಬಿಡುಗಡೆಯನ್ನ ನಾಳೆ ಫೆ.,27 ರಂದು ಕುವೆಂಪುರಂಗ ಮಂದಿದರದಲ್ಲಿ ನಡೆಯಲಿದೆ. ಶಾಸಕಿ ಶಾರದ ಪೂರ್ಯನಾಯ್ಕ, ವಾಗ್ಮಿ ಡಾ. ಗುರುರಾಜ್ ಕರ್ಜಗಿ, ಪ್ರಾಂಶುಪಾಲ ಸುಕೇಶ್ ಶೇರಿಗಾರ್, ಉಪಪ್ರಾಂಶುಪಾಲರಾದ ನೇತ್ರ, ಡಾ.ಎನ್ ಸೋಮೇಶ್ವರ್, ರವೀಂದ್ರ ವೆಂಕಟ್, ವಿದ್ವಾನ್ ಶ್ರೀಧರ್ ಭಟ್, ಶ್ರೀಮತಿ ಸವಿತ ಯಾಜಿ ಭಾಗಿಯಾಗಲಿದ್ದಾರೆ.
Post a Comment