ಭದ್ರಾವತಿಯಲ್ಲಿ ಅಬ್ಬರಿಸಿದ ನಿಖಿಲ್-ವಿಐಎಸ್ಎಲ್ ಪುನಶ್ಚೇತನ ನಿಶ್ಚಿತ

 

ಭದ್ರಾವತಿ ಶಾಸಕರೆ ಬಹಳ ದಿನ‌ ನಿಮ್ಮ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಯಲ್ಲ ಎಂದು ಜೆಡಿಎಸ್ ನ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಅಬ್ಬರಿಸಿದ್ದಾರೆ. 


ಇಂದು ಭದ್ರಾವತಿಯಲ್ಲಿ ಶಾಸಕರ ರಾಜೀನಾಮೆಗೆ ಹಾಗೂ ಪುತ್ರನನ್ನ‌ ಬಂಧಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟಮೆಯಲ್ಲಿ ಮಾತನಾಡಿ, ಶಾಸಕರಿಗೆ ಮತ ಹಾಕಿ ಅವರ ಕುಟುಂಬಕ್ಕೆ ತಲೆತಗ್ಗಿಸುವ ಪರಿಸ್ಥಿತಿ ಭದ್ರಾವತಿ ನಾಗರೀಕರಿಗೆ ಇದೆ. ಅವರ ಸುಪತ್ರರ ಬಗ್ಗೆ ಕೇಳಿದ್ದೆ. ಆದರೆ ಮೊನ್ನೆ ನಡೆದ ಘಟನೆಯಿಂದಾಗಿ ಮಾಧ್ಯಮದ ಮೂಲಕ ಅವರ ಪದ ಬಳಕೆ ಕೇಳಿದ್ದೇನೆ ಎಂದರು. 


ಹಲವಾರು ಘಟನೆ ನಡೆದಿದೆ. ಅವರ ನಿರಂಕುಶಕ್ಕೆ ಲಗಾಮು ಹಾಕಬೇಕು ಎಂದಾಗ ಅಧಿಕಾರವನ್ನ‌ ಬಳಸಿ ಮುಚ್ಚಿಹಾಕಲು ಯತ್ನ ನಡೆದಿದೆ. ವಿಧಾನ ಪರಿಷತ್ ನಲ್ಲಿ ಪ್ರಭಾವಿ ಸಚಿವೆಯೊಬ್ಬರಿಗೆ ಅವ್ಯಚ್ಯ ಶಬ್ದ ಬಳಕೆ ಮಾಡಲಾಗಿದೆ ಎಂದು ಎಂಎಲ್ ಸಿಯನ್ನ‌ಬಂಧಿಸಲಾಗಿ ಠಾಣೆಯಿಂದ ಠಾಣೆಯಿಂದ ಶಿಫ್ಟ್ ಮಾಡಲಾಗುತ್ತಿತ್ತು. ಅವರ ಆಡಿಯೋ ವಿಡಿಯೋವನ್ನ ಎಫ್ಎಸ್ ಎಲ್ ಗೆ ಕಳುಹಿಸಲಾಗಿತ್ತು.


ಅಲ್ಲಿದ್ದ ಧಮ್ಮು ತಾಕತ್ತು ಭದ್ರಾವತಿ ಶಾಸಕರ ಪುತ್ರರ ವಿರುದ್ಧ ಯಾಕಿಲ್ಲ. ಅವರ ಆಡಿಯೋ ಮತ್ತು ವಿಡಿಯೋವನ್ನ‌ ಎಫ್ ಎಸ್ ಎಲ್ ಗೆ ಕೊಟ್ಟಿಲ್ಲ. ರಾಮನಗರದಲ್ಲಿ ನಿಂತು ಅಬ್ಬರಿಸುವ ಡಿಸಿಎಂ ಇಲ್ಲಿನ ಶಾಸಕನ ಪುತ್ರನ ವಿರುದ್ಧ ಯಾಕೆ ಮಾಡುತ್ತಿಲ್ಲ ಎಂದು ಸವಾಲು ಹಾಕಿದ ನಿಖಿಲ್, ಭದ್ರಾವತಿಯನ್ನ್ನ ಹರಾಜು ಹಾಕಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಗ್ರಹಿಸಿದರು. 


ನಮ್ಮ ತಂದೆ ಎರಡು ಬಾರಿ ಸಿಎಂ ಆಗಿದ್ದಾರೆ. ಯಾವತ್ತು ಅಧಿಕಾರ ಬಳಸಿಕೊಂಡು ನಾನು ಕೆಲಸ ಮಾಡಿಲ್ಲ. ಆದರೆ ಭದ್ರಾವತಿ ಶಾಸಕರ ಪುತ್ರರಿಗೆ ಅಧಿಕಾರ ಕೊಟ್ಟವರು ಯಾರು. ನಾನು ಈಗ ರಾಜಕೀಯ ಜೀವನವನ್ನ ಈಗ ಆರಂಭಿಸಿದ್ದೇನೆ. ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು ಕಂಡು ಬಂದರೆ ಸಾರ್ವಜನಿಕ ಬದಕನ್ನ ಈಗಲೆ ಬಿಟ್ಟು ಹೋಗುವೆ ಎಂದು ಸವಾಲು ಹಾಕಿದರು.


ವಿಐಎಸ್ಎಲ್ ಕಾರ್ಖಾನೆಗೆ ಕುಮಾರ್ ಸ್ವಾಮಿ ಶ್ರಮ


ವೈಜಾಕ್ ನ ಸ್ಟೀಲ್ ಪ್ಲಾಂಟ್ 6 ತಿಂಗಳಲ್ಲಿ ಕೇಙದ್ರ ಸಚಿವ ಕುಮಾರ ಸ್ವಾಮಿ ಅವರು 11ಸಾವಿರ ಕೋಟಿ ಬಿಡುಗಡೆ ಮಾಡಿಸಿ ಪುನಶ್ಚೇತನಗೊಳಿಸಿದ್ದಾರೆ. ಇದರಿಂದ 26 ಕುಟುಂಬ ಬದುಕುವಂತೆ ಮಾಡಲಾಗಿದೆ. ಇದನ್ನ ನಿರೀಕ್ಷಿಸಿರಲಿಲ್ಲ. ಅದರಂತೆ ವಿಐಎಸ್ ಎಲ್ ಕಾರ್ಖಾನೆ ಮುಚ್ಚಿಹೋಗಿ ವರ್ಷಗಳೆ ಕಳೆದಿದಿದೆ. ಇದರ ಪುನಶ್ಚೇತನಕ್ಕೆ 15 ಸಾವಿರ ಕೋಟಿ ಹಣ ಬೇಕಿದೆ. ಸೇಲಂ ಮತ್ತು ವೈಜಾಕ್ ನ ಪ್ಲಾಂಟ್ ಪುನಶ್ಚೇತನಗೊಳಿಸಿದಂತೆ ಕುಮಾರ ಸ್ವಾಮಿ‌ ವಿಐಎಸ್ ಎಲ್ ಆರಂಭಿಸಲು ಶ್ರಮಿಸುತ್ತಿದ್ದಾರೆ ಎಂದು ಭರವಸೆ ನೀಡಿದರು. 


ಪ್ರತಿಭಟನೆ ಇಲ್ಲಿಗೆ ಮುಕ್ತಾಯವಾಗೊಲ್ಲ ಇಲ್ಲಿಂದ ಆರಂಭವಾಗಲಿದೆ. ನಾಗರೀಕರು ಜಾಗೃತಿಯಾಗಬೇಕು. ನಿಮ್ಮಿಂದಿಗೆ ಬಿಜೆಪಿ ಜೆಡಿಎಸ್ ಇರುತ್ತೇವೆ ಎಂದು ತಿಳಿಸಿದರು. 

Post a Comment

Previous Post Next Post