ಎಸ್ಪಿ ನೇತೃತ್ವದಲ್ಲಿ ನೊಂದವರ ಸಭೆ

 ಹಾಯ್/ಶಿವಮೊಗ್ಗ

ಶಿವಮೊಗ್ಗ ಬಿ ಉಪ ವಿಭಾಗ ಕಛೇರಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ. ಕೆ. ನೇತೃತ್ವದಲ್ಲಿ ನೊಂದವರ ಸಭೆ ನಡೆದಿದೆ.‌ ನೊಂದವರ ಕುಂದು ಕೊರತೆಯನ್ನು ಆಲಿಸಿದ ಅವರು ನೊಂದವರ ಕುರಿತು ಮಾತನಾಡಿ ಈ ಕೆಳಕಂಡ ಸಲಹೆ ಸೂಚನೆಗಳನ್ನ  ನೀಡಿದ್ದಾರೆ. 

ಮೇಕ್ ಫ್ರೀ ಟ್ರಿಪ್

1) Make Free Trip ಎಂಬ ನಕಲಿ ಸಂಸ್ಥೆಯ ಹೆಸರಿನಲ್ಲಿ ಪ್ರವಾಸ ಕರೆದುಕೊಂಡು ಹೋಗುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತ್ತೆಯಾಗದೆ ಇರುವ ಬಗ್ಗೆ ನೊಂದವರ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.‌ ಇದಕ್ಕೆ ಉತ್ತರಿಸಿದ ಎಸ್ಪಿ ಪ್ರಕರಣ ದಾಖಲಾಗಿದ್ದು,  ಆರೋಪಿತರ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ.  ಹಾಗೂ ಈ ರೀತಿಯ ನಕಲಿ ಜಾಲದ ಮೋಸಕ್ಕೆ ಒಳಗಾಗಬೇಡಿ ಎಂದು ಪೊಲೀಸ್ ಇಲಾಖೆಯಿಂದ ಅರಿವು ಕಾರ್ಯಕ್ರಮಗಳ  ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರೂ ಸಹ ಸಾರ್ವಜನಿಕರು ಸುಲಭವಾಗಿ ಮೋಸದ ಜಾಲಕ್ಕೆ ಒಳಗಾಗುತ್ತಿದ್ದಾರೆ. ಆನ್ ಲೈನ್ ಮುಖಾಂತರ ಹಣದ ವ್ಯವಹಾರ ಮಾಡುವಾಗ ಎಚ್ಚರವಹಿಸಬೇಕೆಂದು ಸೂಚಿಸಿದರು. 

Post a Comment

Previous Post Next Post