ಶಿವಮೊಗ್ಗ: ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ಶತಮಾನೋತ್ಸವದ ಪ್ರಯುಕ್ತ ದ್ವಿ-ಚಕ್ರ ವಾಹನ ಲೋನ್ ಮೇಳ.

 ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ವತಿಯಿಂದ ಸಂಘದ ಶತಮಾನೋತ್ಸವದ ಪ್ರಯುಕ್ತ ದಿನಾಂಕ :10.01.2024 ರಂದು ದ್ವಿ-ಚಕ್ರ ವಾಹನ ಲೋನ್ ಮೇಳ ವನ್ನು ಸರ್ಜಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀ ಡಾ. ಧನಂಜಯ್ ಸರ್ಜಿ ಅವರೊಂದಿಗೆ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಡಿ ಎಸ್ ಅರುಣ್ ಅವರು ಉದ್ಘಾಟಿಸಿದರು.

ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ಅಧ್ಯಕ್ಷರಾದ ಡಿ ಎಂ ಅರವಿಂದ್ ಅವರು, ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಬಿ ಕೆ ಗೋವಿಂದರಾಜು, ಎಂ ಎಸ್ ಹರೀಶ್ ಬಾಬು, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಚಿನ್ ಹಾಗೂ ನಿರ್ದೇಶಕರು, ಸಮಾಜದ ಮುಖಂಡರು ಉಪಸ್ಥಿತರಿದ್ದರು. ಸಂಘದ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಲು ಆಡಳಿತ ಮಂಡಳಿ ಕೋರಿದೆ.

Post a Comment

Previous Post Next Post