ಶಿವಮೊಗ್ಗ: ಸಂಸತ್ತಿನ ಉಭಯಸದನಗಳಿಂದ 142 ಸಂಸದರ ಅಮಾನತು; ಬಿ.ಜೆ.ಪಿ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ.

 ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಹೆಚ್.ಎಸ್.ಸುಂದರೇಶ್ ರವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ

ಕೇಂದ್ರದ  ಬಿ.ಜೆ.ಪಿ. ಸರ್ಕಾರವು  ಸಂಸತ್ತಿನ ಉಭಯಸದನಗಳಿಂದ 142 ಸಂಸದರನ್ನು ಅಮಾನತುಗೊಳಿಸಿ  ಪ್ರಜಾಪ್ರಭುತ್ವದ ಕತ್ತು ಹಿಸುಕಿ ಸಂಸತ್ತನ್ನು ಸ್ಮಶಾನವನ್ನಾಗಿ ಮಾಡಿರುವ ಬಿ.ಜೆ.ಪಿ. ಕೇಂದ್ರ ಸರ್ಕಾರದ ವಿರುದ್ಧ   ಜಿಲ್ಲಾ  ಕಾಂಗ್ರೆಸ್  ಸಮಿತಿಯ  ಅಧ್ಯಕ್ಷರಾದ ಹೆಚ್. ಎಸ್. ಸುಂದರೇಶ್ ರವರು ನೇತೃತ್ವ ದಲ್ಲಿ ಮತ್ತು ಕಾಂಗ್ರೆಸ್  ಮುಖಂಡರ ಉಪಸ್ಥಿತಿ ಯಲ್ಲಿ  ಜಿಲ್ಲಾ ಕಾಂಗ್ರೆಸ್ ಭವನ ದಿಂದ ಪ್ರತಿಭಟನೆ  ಮೆರವಣಿಗೆ ಆರಂಭಗೊಂಡು ಬಾಲರಾಜ್ ಅರಸ್ ರಸ್ತೆ ಮೂಲಕ ಚಲಿಸಿ ನಂತರ ಮಹಾವೀರ ಸರ್ಕಲ್ ( ಕೋರ್ಟ್ ಸರ್ಕಲ್ ನಲ್ಲಿ ) ಭಾರಿ ಪ್ರತಿಭಟನೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಹಲವು ಪ್ರಮುಖರು ಉಪಸ್ಥಿತರಿದ್ದರು.  

Post a Comment

Previous Post Next Post