ಮಧುಬಂಗಾರಪ್ಪ ಅವರ ಜನ್ಮದಿನ: ತೀರ್ಥಹಳಿಯ ಅವರ ಅಭಿಮಾನಿಗಳು ಮತ್ತು ಡಿ.ಕೆ. ಶಿ ಅಭಿಮಾನಿಗಳ ಸಂಘ ತೀರ್ಥಹಳಿ ಇವರ ನೇತೃತ್ವದಲ್ಲಿ ಕುರುವಳಿ ಜೋಪಾಡಿ ನಿವಾಸಿಗಳ ಬೀಡಾರದಲ್ಲಿ ಆಚರಣೆ.

ಕರ್ನಾಟಕದ ಮಾಜಿ  ಮುಖ್ಯಮಂತ್ರಿಗಳು ಬಡವರ ಬಂಧು ದಿ ಎಸ್ ಬಂಗಾರಪ್ಪ ಅವರ ಸುಪುತ್ರ ಸೊರಬ ಕ್ಷೇತ್ರದ ಮಾಜಿ ಶಾಸಕರು ರಾಜ್ಯ ಕಾಂಗ್ರೆಸ್ ಪಕ್ಷದ ಹಿಂದುಳಿದ  ವರ್ಗದ ಅಧ್ಯಕ್ಷರು  ಮಧುಬಂಗಾರಪ್ಪ ಅವರ ಜನ್ಮದಿನ ಇಂದು ರಾಜ್ಯದ ಹಲವಾರು ಕಡೆಯಲ್ಲಿ ಅವರ ಜನ್ಮ ದಿನ ಆಚರಣೆಯನ್ನು  ಅವರ ಅಭಿಮಾನಿಗಳು ಆಚರಿಸುತ್ತ ಇದ್ದಾರೆ.


ತೀರ್ಥಹಳಿಯಲ್ಲಿ ಅವರ ಅಭಿಮಾನಿಗಳು  ಡಿ.ಕೆ. ಶಿ ಅಭಿಮಾನಿಗಳ ಸಂಘ ತೀರ್ಥಹಳಿ ((ರಿ)) ಇವರ ನೇತೃತ್ವದಲ್ಲಿ ಕುರುವಳಿ ಜೋಪಾಡಿ ನಿವಾಸಿಗಳ ಬೀಡಾರದಲ್ಲಿ ಆಚರಿಸಲು ಆಯೋಜಿಸಿದ್ದು 12.30 ಕ್ಕೆ ಇಂದು ಶ್ರೀ ಮಧು ಬಂಗಾರಪ್ಪ ಅವರೇ ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ ದಯಮಾಡಿ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರುಗಳು ಪಟ್ಟಣ ಪಂಚಾಯಿತಿ ಸದಸ್ಯರು ಗ್ರಾಮ ಪಂಚಾಯಿತಿ ಸದಸ್ಯರು ಪಕ್ಷದ ಎಲ್ಲಾ ಘಟಕದ ಪದಾಧಿಕರಿಗಳು ಮತ್ತು ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಈ ಕಾರ್ಯಕ್ರಮದ ಯಶಸ್ಸು ಆಗಲು ಸಹಕರಿಸಿ ಎಂದು ಶ್ರೀ ಮಧು ಬಂಗಾರಪ್ಪ ಅವರ ಅಭಿಮಾನಿಗಳು ಡಿ.ಕೆ. ಶಿ ಅಭಿಮಾನಿಗಳ ಸಂಘ ((ರಿ)) ತೀರ್ಥಹಳಿ ಯವರು ಹೇಳಿದ್ದಾರೆ.


Post a Comment

Previous Post Next Post