ಶಿವಮೊಗ್ಗ: ರಿಪ್ಪನ್ ಪೇಟೆ ಬೆನವಳ್ಳಿ ಗ್ರಾಮದಲ್ಲಿ ಶಾಲಾ ಮಕ್ಕಳ ಪ್ರವಾಸಿ ಬಸ್ ಹಾಗು ಕಾರಿನ ನಡುವೆ ಮುಖಾಮುಖಿ ಡಿಕ್ಕಿ !

 ಬೆನವಳಿ ಗ್ರಾಮದಲ್ಲಿ ಬೆಂಗಳೂರಿನ ಶಾಲಾ ಮಕ್ಕಳನ್ನು ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸ ಕರೆದೊಯ್ದು ವಾಪಾಸ್ ಶಿವಮೊಗ್ಗ ಕಡೆಗೆ ಮರಳಿ ತೆರಳುತ್ತಿದ್ದ ವಿಜಯಲಕ್ಷ್ಮಿ ಬಸ್ ಹಾಗೂ ಶಿವಮೊಗ್ಗದಿಂದ ಹೊಂಬುಜ ದೇವಸ್ಥಾನಕ್ಕೆಂದು ಹೊರಟಿದ್ದ ಮಾರುತಿ ಬಲೆನೋ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಒಂದು ಭೀಕರ ಅಪಾಯದಿಂದ ಎಲ್ಲರು ಒಂದು ಕ್ಷಣ ಆತಂಕಕ್ಕೆ ಒಳಗಾಗಿದ್ದರು. 

 ಈ ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸದ್ಯ ಕಾರಿನಲ್ಲಿ ಏರ್ ಬ್ಯಾಗ್ ಸಹಾಯದಿಂದ ಅದು ಸರಿಯಾದ ಸಮಯಕ್ಕೆ ಕಾರ್ಯನಿರ್ವಹಿಸಿದ್ದರಿಂದ ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದು, ಯಾರಿಗೂ ಯಾವುದೇ ರೀತಿಯ ಗಂಭೀರ ಗಾಯಗಳಾಗಿಲ್ಲ. ಬಸ್ ನಲ್ಲಿ ಇದ್ದಂತಹ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ಅಪಘಾತ ಸಂಬವಿಸಿದ್ದರಿಂದ ಗಾಬರಿಗೊಂಡಿದ್ದು ಅದೃಷ್ಟವಶಾಂತ್ ಯಾವುದೇ ಗಾಯಾಗಳಾಗದೆ ಸುರಕ್ಷಿತವಾಗಿದ್ದಾರೆ.

ಈ ಒಂದು ಅಪಘಾತ ಪ್ರಕರಣ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ

Post a Comment

Previous Post Next Post