ಸ್ತಬ್ದ ಚಿತ್ರ ವಾಹನಕ್ಕೆ ಚಾಲನೆ

 ಶಿವಮೊಗ್ಗ ಸೆಪ್ಟೆಂಬರ್ 08 (ಕರ್ನಾಟಕ ವಾರ್ತೆ):

        ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ವತಿಯಿಂದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ  ಯೋಜನೆಯಡಿ  ಜಿಲ್ಲೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ  ಕಾಲೋನಿಗಳಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆ, 1986 ಹಾಗೂ ತಿದ್ದುಪಡಿ ಕಾಯ್ದೆ 2016ರ ಕುರಿತು ಅರಿವು ಮೂಡಿಸುವ ಸ್ತಬ್ದ ಚಿತ್ರ ವಾಹನಕ್ಕೆ ಸೆ.06 ರಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿಗಳಾದ ಡಾ. ಸೆಲ್ವಮಣಿ .ಆರ್ ರವರು ಚಾಲನೆ ನೀಡಿದರು. ಈ ವೇಳೆ  ಕಾರ್ಮಿಕ ಅಧಿಕಾರಿ ಸೀಬಿ ರಂಗಯ್ಯ, ಕಾರ್ಮಿಕ ನಿರೀಕ್ಷಕರು, ಯೋಜನಾ ನಿರ್ದೇಶಕರು ಹಾಜರಿದ್ದರು.


Post a Comment

Previous Post Next Post